Thursday, October 2, 2008


`ಪ್ರಶಸ್ತಿಯೇ ಪ್ರಾಮುಖ್ಯವಲ್ಲ'

`ನೃತ್ಯ ಸಿಂಗಾರ - 2008' ಆರಂಭ
ಸುರತ್ಕಲ್, ಅ.3- ಪ್ರಶಸ್ತಿಯೇ ಪ್ರಾಮುಖ್ಯವಾಗಿರಬಾರದು. ಸೋಲು - ಗೆಲುವು ಸಾಮಾನ್ಯ. ಭಾಗವಹಿಸುವಿಕೆ ಎಂಬುದು ಅತ್ಯಂತ ಮುಖ್ಯವಾದುದು ಎಂದು ಹಿರಿಯ ನೃತ್ಯ ಕಲಾವಿದ ವಿದ್ವಾನ್ ಉಳ್ಳಾಲ ಮೋಹನ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.
ಅವರು ಸುರತ್ಕಲ್ ಗೋವಿಂದ ದಾಸ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ `ನೃತ್ಯ ಸಿಂಗಾರ - 2008' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಒಂದು ಸಾಂಸ್ಕೃತಿಕ ತಂಡವನ್ನು ರೂಪಿಸುವ ದೃಷ್ಠಿಯಿಂದ `ನೃತ್ಯ ಸಿಂಗಾರ' ಆಯೋಜಿಸಲಾಗಿದೆ ಎಂದು ಡಾ.ಕೆ ಚಿನ್ನಪ್ಪ ಗೌಡ ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಹಿಂದೂ ವಿದ್ಯಾದಾಯಿನಿ ಸಂಘದ ಅಧ್ಯಕ್ಷ ಎಂ.ಎಸ್ ಕೃಷ್ಣ ಭಟ್ ವಹಿಸಿದ್ದರು.
ಕಾಲೇಜಿನ ಸಂಚಾಲಕ ವೆಂಕಟ್ರಾವ್, ಉಪನ್ಯಾಸಕ ಕೃಷ್ಣಮೂರ್ತಿ ವೇದಿಕೆಯಲ್ಲಿದ್ದರು.
ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ರಾಜ್ ಮೋಹನ್ ರಾವ್ ಸ್ವಾಗತಿಸಿದರು. ಜ್ಯೋತಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಪ್ರೊ.ದೇವಪ್ಪ ಕುಳಾಯಿ ವಂದಿಸಿದರು.